Sringeri Shankaracharyaru - Paramapujya Jagadguru Sri Bharathi Theertha Mahaswamigalu (Kannada)

ಶೃಂಗೇರಿ ಶ್ರೀ ಶಾರದಾ ಪೀಠದ 36ನೇ ಪೀಠಾಧೀಶ್ವರರಾದ ಪರಮ ಪೂಜ್ಯ ಜಗದ್ಗುರು ಶಂಕರಾಚಾರ್ಯ ಅನಂತಶ್ರೀ-ವಿಭೂಷಿತ ಭಾರತೀ ತೀರ್ಥ ಮಹಾಸ್ವಾಮಿಗಳವರು ಅನೇಕ ಶಾಸ್ತ್ರಗಳಲ್ಲಿ ಅನುಪಮ ವಿದ್ವಾಂಸರೆಂದು ವಿಶ್ವವಿಖ್ಯಾತರಾಗಿದ್ದಾರೆ. ತಮ್ಮ ಬಾಲ್ಯದಿಂದಲೂ ನಿಷ್ಠೆಯ ಶಾಸ್ತ್ರಬದ್ಧ ಜೀವನ, ಭಗವದ್ಭಕ್ತಿ, ಸುತೀಕ್ಷ್ಣ ಬುದ್ಧಿವಂತಿಕೆ, ವಿನಮ್ರತೆ, ನಿರ್ಲಿಪ್ತತೆ ಮತ್ತು ವಿದ್ಯೆದ ತೀವ್ರ ನಿರಂತರ ಬಯಕೆ — ಇವೆಲ್ಲವನ್ನೂ ತಮ್ಮ ವ್ಯಕ್ತಿವ್ತದಲ್ಲಿ ಸಿದ್ಧಪಡಿಸಿದ ಅವರು, ಪರಮ ಪೂಜ್ಯ ಜಗದ್ಗುರು ಶಂಕರಾಚಾರ್ಯ ಅನಂತಶ್ರೀ-ವಿಭೂಷಿತ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಪಾದಾರವಿಂದಗಳಲ್ಲಿ ಆಶ್ರಯವನ್ನು ಪಡೆದುದು, ಅವರಿಂದ ಸಂನ್ಯಾಸಾಶ್ರಮದ ಅನುಗ್ರಹವನ್ನು ಪಡೆದುದು, ಅವರ ಅಡಿದಾವರೆಗಳಲ್ಲಿ ತರ್ಕ ಮತ್ತು ವೇದಾಂತ ಶಾಸ್ತ್ರಗಳ ಸಮಗ್ರ ಅಧ್ಯಯನ ಮಾಡಿದುದು ಮುಂತಾದ ವಿವರಗಳು ಈ ಮನೋಹರವಾದ ಚಿತ್ರಾತ್ಮಕ ಪುಸ್ತಕದಲ್ಲಿ ಇವೆ. ಭಾರತಾದ್ಯಂತ ಅನೇಕ ಬಾರಿ ಪರಮಪೂಜ್ಯರು ಕೈಗೊಂಡ ವಿಜಯ ಯಾತ್ರೆಗಳು, ಸಂಸ್ಕೃತ, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಅವರ ನಿರರ್ಗಳ ವಾಗ್ವೈಖರೀ, ಸಂಸ್ಕೃತ, ವೇದಗಳು ಮತ್ತು ಶಾಸ್ತ್ರಗಳ ಸಂರಕ್ಷಣೆಗಾಗಿ ಮಾತ್ರವಲ್ಲದೆ ಅವುಗಳ ಪ್ರಚಾರ-ಪ್ರಸಾರಕ್ಕಾಗಿ ಅವರ ಅನನ್ಯ ಸಕಾರಾತ್ಮಕ ಕಟಿಬದ್ಧತೆ, ಅವರ ಅನೇಕ ದೂರಗಾಮಿ ಧಾರ್ಮಿಕ ಮತ್ತು ಸಾಮಾಜಿಕ ಯೊಜನೆಗಳು, ಅಸಂಖ್ಯಾತ ಶಿಷ್ಯರಿಗೆ ಅವರು ತಮ್ಮ ಕರುಣಾಪೂರಿತ ಅನುಗ್ರಹವನ್ನು ದಯಪಾಲಿಸಿದುದು — ಈ ಎಲ್ಲ ಕಾರಣಗಳಿಂದಲೂ ಕೂಡ ಪರಮಪೂಜ್ಯರು ಸುಪ್ರಸಿದ್ಧರಾಗಿದ್ದಾರೆ. ಅತಿ ಸರಳವಾದ ಅವರ ಬೋಧನೆಗಳು ಸನಾತನ ಧರ್ಮದ ಮಾರ್ಗದಲ್ಲಿ ಎಂದಿಗೂ ನಡೆವಂತೆ ಸಾಮಾನ್ಯ ಜನರನ್ನು ಪರಿಣಾಮಕಾರಿಯಾಗಿ ಪ್ರೇರೇಪಿಸುತ್ತವೆ.

more...
...less